ಗ್ರಾಮ ಸಭೆಯಲ್ಲಿ ಸೇರಿರುವ ಎಲ್ಲಾ ಮಹಿಳೆಯರಿಗೆ ಕಿವಿಮಾತು ಹೇಳಿದರು. ಮುಚ್ಚಿದಂತಹ ಮಧ್ಯದಂಗಡಿ ಮತ್ತೆ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಚರ್ಚೆ ನಡೆಸಿದರು. ಈಗ ಮಧ್ಯದಂಗಡಿ ಮುಚ್ಚಿಸಿದ್ದಾರೆ. ಪಂಚಾಯತ್ ಕಛೇರಿಗೆ ಬೀಗ ಮುದ್ರೆ ಹಾಕಿ ಧರಣಿಯನ್ನು ನಡೆಸುವ ಬಗ್ಗೆ ಚರ್ಚೆಯನ್ನು ನಡೆಸಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ತಿಳಿಸಿ ನಿಮಗೆ ನ್ಯಾಯ ಕೊಡಿಸುತ್ತೇವೆ ಎಂದು ಭರವಸೆ ನೀಡಿದರು. ಈ ಕಾರ್ಯಕ್ರಮಕ್ಕೆ ನಮ್ಮ ಸಂಸ್ಥೆಯ ಕಾರ್ಯಕರ್ತೆಯಾದ ಶ್ರೀಮತಿ ನಳಿನಿ. ಜಿ. ಶೆಟ್ಟಿ ಭಾಗವಹಿಸಿದರು.
Comments powered by CComment