ದಿನಾಂಕ 21.07.2022 ರಂದು ಸಹೋದಯ ಸಭಾಂಗಣದಲ್ಲಿ ಸಹೋದಯ ಬೆಥನಿ ಸೇವಾ ಕೇಂದ್ರ ಹಾಗೂ ಕಾರ್ಮಿಕ ಇಲಾಖೆ ಮಂಗಳೂರು ಇವರ ವತಿಯಿಂದ ಗೃಹ ಕಾರ್ಮಿಕರಿಗೆ, ಕಾವಲುಗಾರರಿಗೆ, ಕೂಲಿ ಕಾರ್ಮಿಕ ಮೊದಲಾದವರಿಗೆ ಸರಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದಲ್ಲಿ ಸಹೋದಯ ಬೆಥನಿ ಸೇವಾ ಕೇಂದ್ರದ ಸಂಯೋಜಕರಾದ ಭ|ಲೀನಾ ಡಿ ಕೊಸ್ಟ, ಸಿನಿಯರ್ ಇಸ್ಪೆಕ್ಟರ್ ಶ್ರೀಮತಿ ಮೇರಿ ಮತ್ತು ಸಿಬ್ಬಂದಿ ವರ್ಗ( ಕಾರ್ಮಿಕ ಇಲಾಖೆ ಮಂಗಳೂರು) ಸಹೋದಯ ಸಂಸ್ಥೆಯ ಕಾರ್ಯಕರ್ತೆಯರಾದ ಶ್ರೀಮತಿ ನಳಿನಿ, ಶ್ರೀಮತಿ ಅಶ್ವಿನಿ, ಕು| ರಂಜಿನಿ ಮೊದಲಾದವರು ಉಪಸ್ಥಿತರಿದ್ದರು. ನಂತರ ಕಾರ್ಮಿಕರಿಗೆ ಇ-ಶ್ರಮ ಕಾರ್ಡ್ ಹಾಗೂ ಪ್ರಧಾನ ಮಂತ್ರಿ ಪಿಂಚಣಿ ಯೋಜನೆಯ ಬಗ್ಗೆ ಹಾಗೂ ಇದರಿಂದ ಒದಗುವ ಸರಕರಿ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಯಿತು. ತದನಂತರ ಸಭೆಯಲ್ಲಿ ಹಾಜರಾಗಿದ್ದ ಕಾರ್ಮಿಕರಿಗೆ ಇ-ಶ್ರಮ ಕಾರ್ಡ್ ಮತ್ತು ಪಿಂಚಣೆ ಕಾರ್ಡ್ ನ್ನು ಮಾಡಿಸಿಕೊಡಲಾಯಿತಿ. ಒಟ್ಟು 43 ಜನರು ಭಾಗವಹಿಸಿ ಈ ಪ್ರಯೋಜನವನ್ನು ಪಡೆದುಕೊಂಡರು.

 

 

 

 

 

Comments powered by CComment

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by