ದಿನಾಂಕ 9.09.2021 ರಂದು ಕಾರ್ಮಿಕ ಇಲಾಖೆ, ಮಂಗಳೂರು ಇವರ ಸಹಯೋಗದಲ್ಲಿ ಸಹೋದಯ ಬೆಥನಿ ಸೇವಾ ಕೇಂದ್ರದಲ್ಲಿ ಅಸಂಘಟಿತ ಮಹಿಳಾ ಕಾರ್ಮಿಕರಾದ ಹೊಲಿಗೆ ವೃತ್ತಿ, ಗೃಹ ಕಾರ್ಮಿಕರು ಮೊದಲಾದವರನ್ನು ಗುರುತಿಸಿ ಇಲಾಖೆಯ ವತಿಯಿಂದ ನೀಡಲಾದ ಸುರಕ್ಷಾ ಕಿಟ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಸಹೋದಯ ಕೇಂದ್ರದ ಸಂಯೋಜಕರಾದ ಭ|ಲೀನಾ ಡಿ’ಕೋಸ್ಟ, ಸಂತ ಜೋಸೆಫ್ ಶಾಲೆಯ ಮುಖ್ಯೋಪಾಧ್ಯಾಯರಾದ ಭ| ವೀಣಾ ಹಾಗೂ ಸಂಸ್ಥೆಯ ಕಾರ್ಯಕರ್ತೆಯರಾದ ಶ್ರೀಮತಿ ನಳಿನಿ,ಕು| ಐರಲ್, ಕು|ರಂಜಿನಿ ಹಾಗೂ ಒಕ್ಕೂಟದ ಪದಾಥಿಕಾರಿಗಳಾದ ಶ್ರೀಮತಿ ಶೋಭಾ , ಕು| ಮುಮ್ತಾಜ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಂಕನಾಡಿ, ಪೊರ್ಕೋಡಿ, ಗೋರಿಗುಡ್ಡ ಇಲ್ಲಿನ ಫಲಾನುಭವಿಗಳಿಗೆ ಸ್ಯಾನಿಟೈಸ್ಸರ್, ಮಾಸ್ಕ್, ಹ್ಯಾಂಡ್‌ವಾಶ್, ಸೋಪ್, ಸ್ಯಾನಿಟರಿ ನ್ಯಾಪ್ಕಿನ್ ಒಳಗೊಂಡಿರುವ ಸುರಕ್ಷಾ ಕಿಟನ್ನು ವಿತರಿಸಲಾಯಿತು. ಸುಮಾರು 240 ಮಹಿಳಾ ಕಾರ್ಮಿಕರು ಇದರ ಪ್ರಯೋಜನವನ್ನು ಪಡೆದುಕೊಂಡರು.

 

 

 

 

 

 

 

 

 

 

Comments powered by CComment

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by