ದಿನಾಂಕ 05.05.2022 ರಂದು ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ಬಜ್ಪೆ ಗುಂಡಾವುಪದವು ಪರಿಸರದಲ್ಲಿ ಮಕ್ಕಳ ಸಂಘವನ್ನು ರಚನೆ ಮಾಡಲಾಯಿತು. ಕಾರ್ಯಕ್ರಮವನ್ನು ದೇವರ ಸ್ಮರಣೆಯೊಂದಿಗೆ ಆರಂಭಿಸಿಲಾಯಿತು. ಸಹೋದಯ ಸಂಸ್ಥೆಯ ಕಾರ್ಯಕರ್ತೆಯಾದ ಶ್ರೀಮತಿ ನಳಿನಿ ಇವರು ಮಕ್ಕಳ ಪರಿಚಯವನ್ನು ಮಾಡಿಸಿ ಅವರಿಗೆ ಮೊಬೈಲ್ ಬಳಕೆ, ಮಾದಕವ್ಯಸನದಿಂದಾಗುವ ಪರಿಣಾಮ ಮೊದಲಾದವುಗಳ ಬಗ್ಗೆ ಮಾಹಿತಿ ನೀಡಿದರು. ತದನಂತರ ಸಂಘಕ್ಕೆ ನಂದಿನಿ ಮಕ್ಕಳ ಸಂಘ ಎಂದು ಹೆಸರಿಟ್ಟು ಅಧ್ಯಕ್ಷೆ, ಉಪಾಧ್ಯಕ್ಷ, ಕಾರ್ಯದರ್ಶಿ, ಉಪಕಾರ್ಯದರ್ಶಿಯನ್ನು ನೇಮಿಸಿ ಅವರವರ ಜವಾಬ್ದಾರಿಯನ್ನು ತಿಳಿಸಲಾಯಿತು. ನಂತರ ಮಕ್ಕಳಿಂದಲ್ಲೆ ನೃತ್ಯ ಹಾಡುಗಳನ್ನು ಹಾಡಿಸಲಾಯಿತು. ಕು| ರಂಜಿನಿ ಇವರು ಆಟಗಳನ್ನು ಆಡಿಸಿ ಸಿಹಿಯನ್ನು ಹಂಚಿ ಕು| ಪ್ರಿಯ ಇವರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.