ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ತುರ್ತು ನೆರವಿನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಶಕ್ತಿನಗರ, ಜಿಜೈ, ಕಿನ್ನಿಕಂಬ್ಳ, ಹಾಗೂ ಸುರಲ್ಪಾಡಿ ಇಲ್ಲಿನ ಬಡ ಕುಟುಂಬಗಳನ್ನು ಗುರುತಿಸಿ ಅವರಿಗೆ ಕೊರೋನಾ ರೋಗದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿ ನಂತರ ಆಹಾರ ಪೊಟ್ಟಣ, ಮಾಸ್ಕ್, ಸೋಪು, ಕಾಫ್ಲೇಟ್ ಹಾಗೂ ಪ್ರೋಟೀನ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಹೋದಯ ಬೆಥನಿ ಸೇವಾ ಕೇಂದ್ರದ ಸಂಯೋಜಕರಾದ ಭಗಿನಿ ಲೀನಾ ಡಿ’ಕೋಸ್ಟ, ಭಗಿನಿ ಲಿಲ್ಲಿ ಹಾಗೂ ಕು| ರಂಜಿನಿ ಮೊದಲಾದವರು ಭಾಗವಹಿಸಿದ್ದರು.
Comments powered by CComment